ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ ಚುನಾವಣೆ ಕನ್ನಡ ಜನರಿಗೆ ಹಾಗಾಗಿರಲಿಲ್ಲ. ಕಳೆದ ಮೈತ್ರಿ ಸರ್ಕಾರ ಬಹಳ ಚೆನ್ನಾಗಿತ್ತು. ಆದರೆ ಅವರಿತ್ತ ಸೂಚನೆಗಳು ಸಮರ್ಪಕವಾಗಿರಲಿಲ್ಲ ಮತ್ತು ಕನ್ನಡ ಮತದಾರ ಏಕಪಕ್ಷ ಆಡಳಿತದ ಬಗ್ಗೆ ತೀರ್ಮಾನಿಸಿದ. ಆದರೆ ಯಾವ ಪಕ್ಷಕ್ಕೆ ಮತ ನೀಡಬೇಕೆಂಬುದು ಗಂಭೀರ ಪ್ರಶ್ನೆಯಾಗಿತ್ತು. ನಮ್ಮೆಲ್ಲರಿಗೂ ಗೊತ್ತಿತ್ತು ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಶ್ರೇಷ್ಠ ಮುಂದಾಳುಗಳನ್ನು ಹೊಂದಿದೆ ಅವರು ಗೌರವಾನ್ವಿತರು ಮತ್ತು ಅವರನ್ನು ಕರ್ನಾಟಕದ ಜನತೆ ಗೌರವದಿಂದ ಕಾಣುತ್ತದೆ. ಪ್ರತಿಯೊಂದು ಪಕ್ಷವೂ ತನ್ನದೇ ಆದ ಆಕರ್ಷಕವಾದ ಪ್ರಣಾಳಿಕೆಗಳನ್ನು ಹೊಂದಿತ್ತು. (ಸಾಂದರ್ಭಿಕವಾಗಿ ನಾನು ಹೇಳಲಿಚ್ಛಿಸುವುದೇನೆಂದರೆ ಕಳೆದ ೫೦ ವರ್ಷಗಳಲ್ಲಿ ನನ್ನ ಉತ್ತಮ ಪ್ರಯತ್ನಗಳ ನಂತರವೂ ಯಾವುದೇ ಪಕ್ಷದ ಒಂದೂ ಪ್ರಣಾಳಿಕೆ ನನಗೆ ದೊರೆಯಲಿಲ್ಲ.) ಹಾಗೇ ಎಲ್ಲರೂ ಕೇಂದ್ರದಲ್ಲಿ ಬಹಳ ಪ್ರಭಾವಿಗಳಾಗಿದ್ದವರು. ಹೀಗಾಗಿ ಅಧಿಕಾರಕ್ಕೆ ಚುನಾಯಿಸಬೇಕಾದ ಪಕ್ಷದ ಆಯ್ಕೆ ಕಠಿಣವಾದ ಕೆಲಸವಾಗಿತ್ತು. ಇದರೊಂದಿಗೆ ಕರ್ನಾಟಕದ ಮತದಾರ ಯಾವಾಗಲೂ ಒಂದು ಗಂಭೀರ ರಾಜಕೀಯ ಮೋಡಿಗೊಳಗಾಗಿದ್ದು ಕರ್ನಾಟಕದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು.

ಒಂದು ವೇಳೆ ಕರ್ನಾಟಕ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಚುನಾಯಿಸಿದ್ದರೆ ಆಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿತ್ತು. ಹಾಗೆಯೇ ಒಂದು ವೇಳೆ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರದ ಮತ ನೀಡಿದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು. ಫಲಿತಾಂಶವಾಗಿ ಕರ್ನಾಟಕ ಸುಮಾರು ೨ ದಶಕಗಳ ಕಾಲ ಮಲತಾಯಿ ನಡವಳಿಕೆಗೆ ಒಳಗಾಗಿದೆ. ನಾವು ದೇವರನ್ನು ಬೆಂಬಲಿಸುವುದರಿಂದ ಅಸುರರು ಪ್ರಹಾರ ಮಾಡುವ ಜೈವಿಕಯುದ್ಧಕ್ಕೆ ಕಾಲ ಕಾಲದಲ್ಲಿ ಸಂಕಟಪಟ್ಟಿದ್ದೇವೆ. ಮನುಷ್ಯರು ಯಾವಾಗಲೂ ಶನಿಕಾಟದಿಂದ ಸಂಕಟಪಟ್ಟಿದ್ದಾರೆ ಮತ್ತು ವ್ಯಕ್ತಿಗಳ ವೈಯಕ್ತಿಕ ಪ್ರತಿರೋಧದಿಂದ. ಆದರೆ ನಾನು ಸಂಪೂರ್ಣ ರಾಜ್ಯ ವಿಚಿತ್ರ ಶಾಪದ ಭಯಂಕರ ಹಿಡಿತದಿಂದ ನರಳುವುದನ್ನು ನೋಡಿಲ್ಲ.

ಈ ರೀತಿ ೨೦೦೮ ಮೇ ೩೦ ಶನಿವಾರದಂದು ಮಧ್ಯಾಹ್ನ ೧.೫೦ಕ್ಕೆ ಜಯಶೀಲರಾದ ಶ್ರೀ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡಾಗ ಅದು ಕರ್ನಾಟಕದ ಜನತೆಯ ಮಹತ್ತರವಾದ ಜಯವಾಗಿತ್ತು, ಬಿಜೆಪಿಯದಲ್ಲ. ಏಕೆಂದರೆ ಕರ್ನಾಟಕದ ಜನತೆ ಕರ್ನಾಟಕ ರಾಜ್ಯದಲ್ಲಿ ಒಂದು ಪಕ್ಷದ ಅಧಿಕಾರವನ್ನು ಖಚಿತಗೊಳಿಸಿತು.

ಶ್ರೀ ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ ದೈವಕ್ಕೆ ಹೆದರುವ ವ್ಯಕ್ತಿ. ಅವರಿಗೆ ಭಾರತದ ಎಲ್ಲಾ ದೇವಸ್ಥಾನದ ದೇವ ದೇವಿಯರ ಅನುಗ್ರಹ ಇದೆ. ಅವರ ಪ್ರಾರ್ಥನೆಯ ಶಕ್ತಿ ಪ್ರಸಿದ್ಧವಾಗಿದೆ. ಅವರ ಪ್ರಾರ್ಥನೆ ದೇವ ದೇವಿಯರನ್ನು ಸೆಕೆಂಡಿಗೆ ೫ ಬೆಳಕು ವರ್ಷ ವೇಗದಲ್ಲಿ ತಲುಪುತ್ತದೆ. ದೇವರಿಗೆ ಹತ್ತಿರವಾಗಿರುವ ಅವರ ಗುಣದಿಂದಾಗಿ ಅವರು ಬಗೆ ಬಗೆಯ ವರಗಳಿಂದ ಆಶೀರ್ವಾದಿತರು. ಆದರೆ ಈ ವರಗಳು ಅವರಿಗೆ ಒಂದು ಆಜ್ಞೆಯೊಂದಿಗೆ ಬಂದಿದೆ. ಅದು ನಗರಾಭಿವೃದ್ದಿ, ಗ್ರಾಮಾಭಿವೃದ್ಧಿಗಳ ಬಗ್ಗೆ ವಿಶೇಷವಾಗಿ ಅಭಿವೃದ್ಧಿಗೆ ಆದ್ಯತೆ ಯೊಂದಿಗೆ ಗಮನ ಕೊಡಬೇಕೆಂದು.

ನಾನು ಕರ್ನಾಟಕದಲ್ಲಿ ಅನೇಕ ಗ್ರಾಮಗಳನ್ನು ನೋಡಿದ್ದೇನೆ. ಅವುಗಳಲ್ಲಿ ಬಹುತೇಕ ಅಸ್ತವ್ಯಸ್ತವಾಗಿ ಯೋಜಿಸಿರುವುದು. ಮೂಲಭೂತ ಸೌಕರ್ಯದ ಕೊರತೆಯಿದೆ. ನಾನು ಎಂದೂ ಯಾವ ಹಳ್ಳಿಯಲ್ಲೂ ಯಾವ ಎಂ.ಜಿ. ರಸ್ತೆಯನ್ನು ನೋಡಿಲ್ಲ (ರಸ್ತೆ ಅಗಲವಿಲ್ಲದಿರಬಹುದು. ಆದರೆ ಮಹಾತ್ಮರ ಹೆಸರು ಅದು. ಸ್ವಚ್ಛವಾಗಿರಬೇಕೆಂದು ಸೂಚಿಸುತ್ತದೆ). ಆದರೆ ಗ್ರಾಮಗಳ ಸಹಜ ಪರಿಸರ ಅವುಗಳ ಗುಡ್ಡಗಳು, ಬೆಟ್ಟಗಳು ದೊಡ್ಡ ಮರಗಳು, ಹೂ ಗಿಡಗಳು ಹೊಳೆ ತೊರೆಗಳಿಂದ ತುಂಬಾ ರಮ್ಯ ಕೆರೆಗಳಿವೆ, ಕೊಳಗಳಿವೆ. ಅವುಗಳಲ್ಲಿನ ಬಣ್ಣ ಬಣ್ಣದ ಮೀನುಗಳು ನಿಮ್ಮೊಂದಿಗೆ ಆಡಲಿಚ್ಛಿಸುತ್ತವೆ. ಅಲ್ಲಿ ನೀವು ಹಸಿರು ಹುಲ್ಲಿನ ಮೇಲೆ ಸುಳಿಗಾಳಿಯ ಶಬ್ದವನ್ನು ಆಲಿಸುತ್ತ ನಡಿಯುತ್ತೀರಿ. ಹದ್ದುಗಳು ಕೆಳಗೆ ಹಾರಿ ಹರಿವ ಹಾವುಗಳನ್ನು ಹಿಡಿದುಕೊಳ್ಳುವ ಧೈರ್ಯ ಮಾಡುವುದು ಅಲ್ಲೇ ನಾವು ಗಮನಿಸದಿರುವುದು.

ಕೆಲವು ದಶಕಗಳ ಹಿಂದೆ ಭರಮಸಾಗರದ ಬಳಿಯಲ್ಲಿ ಒಂದು ಯೋಜನೆಯ ಕೆಲಸಕ್ಕಾಗಿ ಶಿಬಿರ ಮಾಡಿದ್ದೆ. ನನ್ನ ಸ್ವಿಸ್ ಕಾಟೇಜಿನಿಂದ (ಗುಡಿಸಿಲಿಗೆ ಭವ್ಯ ಹೆಸರು) ಹೊರಬಂದೆ, ರಾತ್ರಿಯೂಟವಾದ ಮೇಲೆ ಪರಿಸರವೆಲ್ಲ ಬೆಳಕಾಗಿತ್ತು. ನಾನು ಮೇಲೆ ನೋಡಿದೆ. ನಕ್ಷತ್ರಭರಿತ ಆಕಾಶವನ್ನು ನೋಡಿ ಚಕಿತನಾದೆ. ಕೋಟ್ಯಂತರ ನಕ್ಷತ್ರಗಳು ಗ್ರಾಮವನ್ನು ಸ್ವರ್ಗೀಯ ಬೆಳಕಿನಿಂದ ಬೆಳಗಿಸಲು ಬಂದಂತೆ ಕಾಣಿಸಿತು. ಈ ಪ್ರಕೃತಿಯ ಸುಂದರ ವಸ್ತುಗಳ ಮಧ್ಯೆ ಮನುಷ್ಯ ಕೊಳಕು ಗ್ರಾಮವನ್ನು ಕೊಳಕು ಪಟ್ಟಣವನ್ನು ನಿರ್ಮಿಸಿದರೆ ಅದು ಪ್ರಕೃತಿಯ ವಿರುದ್ಧ, ಮನುಷ್ಯನ ಕ್ರೌರ್ಯವಲ್ಲದೆ ಬೇರೇನು ಅಲ್ಲ. ನಾನು ಡೆಟ್ರಾಯ್ಟ್ನಲ್ಲಿದ್ದಾಗ ಗುಪ್ತರ ಕಾಲದ ಬಗ್ಗೆ ಒಂದು ಪುಸ್ತಕ ಓದಿದ್ದೆ. ಒಂದು ಪ್ಯಾರಾದಲ್ಲಿ ಗ್ರಂಥಕರ್ತ ಭಾರತದಲ್ಲಿ ಕಳೆದ ೨,೦೦೦ ವರ್ಷಗಳಲ್ಲಿ ಗ್ರಾಮಗಳು ಹಾಗು ಗ್ರಾಮಜೀವನ ಬದಲಾಗಲಿಲ್ಲವೆಂದು ತಿಳಿಸಿದ್ದಾನೆ. ಆದರೆ ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಬದಲಾಯಿಸುತ್ತಾರೆ. ಅವರು ಈಗಾಗಲೇ ಘೋಷಿಸಿದ್ದಾರೆ ಎಲ್ಲ ಗ್ರಾಮಗಳು ಗುಡಿಸಲು ರಹಿತ ಗ್ರಾಮ ಗಳಾಗುತ್ತವೆ ಎಂದು. ಕರ್ನಾಟಕ ಬಹುಬೇಗ ಬೃಹತ್ ಸಂಖ್ಯೆಯ ಸುವರ್ಣ ಗ್ರಾಮಗಳಾಗುತ್ತವೆ. ಏಕೆಂದರೆ ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಾದರಿ ಗ್ರಾಮ ಹೇಗಿರಬೇಕೆಂದು ತಿಳಿದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಲೆ
Next post ನನ್ನಾಕೆ ಸುಂದರಿ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys